Rice, Sugar, Spices packets sent as a donation to Kodagu refugees by the Karnataka Pradesh Congress Committee, 21/08/2018
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಕೊಡಗು ನಿರಾಶ್ರಿತರಿಗೆ ದೇಣಿಗೆಯಾಗಿ ಕಳಿಸಿರುವ 50,000 ಕೆಜಿ ಅಕ್ಕಿ,10,000 ಕೆಜಿ ಸಕ್ಕರೆ, 50,000 ಪ್ಯಾಕೆಟ್ ಸಾಂಬಾರು ಪದಾರ್ಥಗಳು ಇಂದು ಕೊಡಗಿಗೆ ತಲುಪಿ ನಿರಾಶ್ರಿತರಿಗೆ ವಿತರಿಸಲಾಯಿತು.. Kpcc Office Queens Road Bangalore Dinesh Gundu Rao Eshwar Khandre

An election campaign meeting of Congress Party candidate Smt. KP Chandtakala was held at the JC platform in Somwarpet., 07/05/2018
ಕೊಡಗಿನ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಘಟಕದ ವತಿಯಿಂದ ಸೋಮವಾರಪೇಟೆಯ ಜೆ.ಸಿ.ವೇದಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀಮತಿ ಕೆ.ಪಿ.ಚಂದ್ತಕಲಾ ರವರ ಚುನಾವಣಾ ಪ್ರಚಾರ ಸಭೆ ನಡೆಯಿತು.ಈ ಸಾರ್ವಜನಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯದ ಘನವೆತ್ತ ಇಂಧನ ಸಚಿವ,ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ DK Shivakumar ಮಾತನಾಡಿ #ಕೆಪಿ_ಚಂದ್ರಕಲಾ ಪರವಾಗಿ ಮತಯಾಚನೆಯನ್ನು ನಡೆಸಿದರು..

BJP Karnataka is calling Congress achievement as our achievement, 07/05/2018
ಕಾಂಗ್ರೆಸ್ ಸಾಧನೆಯನ್ನು ನಮ್ಮ ಸಾಧನೆ ಎಂದು ಹೇಳುತ್ತಿರುವ ಬಿಜೆಪಿ ಕರ್ನಾಟಕ:ಅರುಣ್ ಮಾಚಯ್ಯ. ಕೊಡಗು ಜಿಲ್ಲೆಯ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಒಂದು ಭಾಗವಾದ ಪೇರಾಜೆ ವಲಯದಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅರುಣ್ ಮಾಚಯ್ಯ ಬಿಜೆಪಿಯವರು ಕಾಂಗ್ರೆಸ್ ಸಾಧನೆಯನ್ನು ನಮ್ಮ ಸಾದನೆಯೆಂದು ಜನರಲ್ಲಿ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ.ಇದನ್ನು ಯಾರು ನಂಬಬಾರದೆಂದು ಜನರಲ್ಲಿ ಕಿವಿಮಾತು ಹೇಳಿದರು...ಈ ಸಭೆಯಲ್ಲಿ ಅನೇಕ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡರು... ಈ ಬಾರಿ ವಿರಾಜಪೇಟೆಗೆ ನಮ್ಮ ಅರುಣ್ ಮಾಚಯ್ಯ

He promised to withdraw from the election campaign and work for the party candidate, 27/04/2018
ಚುನಾವಣಾ ಅಕಾಡದಿಂದ ಹಿಂದೆ ಸರಿದು ಪಕ್ಷದ ಅಭ್ಯರ್ಥಿಗಾಗಿ ದುಡಿಯುವ ಭರವಸೆ. ಕಾಂಗ್ರೆಸ್ ನಾಯಕಿ ಹಾಗು ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪನವರನ್ನು ಇಂದು ಭೇಟಿ ಮಾಡಿದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅರುಣ್ ಮಾಚಯ್ಯ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಪದ್ಮಿನಿ ಪೊನ್ನಪ್ಪ ನಾಮಪತ್ರ ಹಿಂಪಡೆಯುವ ಭರವಸೆ ನೀಡಿದ್ದು ವಿರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಅರುಣ್ ಮಾಚಯ್ಯ ಪರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಅವರು ತಿಳಿಸಿದ್ದಾರೆ

Pre-election 2018 meeting of booth, zone and block level workers was held, 22/04/2018
ಕೊಡಗು ಜಿಲ್ಲಾ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ವತಿಯಿಂದ 2018ರ ಚುನಾವಣಾ ಪೂರ್ವಭಾವಿ ಬೂತ್,ವಲಯ,ಬ್ಲಾಕ್ ಮಟ್ಟದ ಕಾರ್ಯಕರ್ತರ ಸಭೆಯು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಕಲ್ ರಮಾನಾಥ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು..ಈ ಸಭೆಯಲ್ಲಿ ವಿರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅರುಣ್ ಮಾಚಯ್ಯ ರವರು ಪಾಲ್ಗೊಂಡು ಕಾರ್ಯಕರ್ತರನ್ನು ಹುರಿದುಂಬಿಸಿದರು..
